ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಲಿಮಿಟೆಡ್ ನಿರ್ವಹಿಸುತ್ತಿರುವ 19 ರೆಸಾರ್ಟ್ಗಳಲ್ಲಿ ಮತ್ತು 1 ಹೋಟೆಲ್ನಲ್ಲಿ ವ್ಯಾಪಿಸಿರುವ ೩೬೬ ಕೊಠಡಿಗಳು ಅಲ್ಲದೆ, ನಿರ್ವಹಣಾ ಒಪ್ಪಂದದ ಮೇರೆಗೆ 4 ರೆಸಾರ್ಟ್ಗಳಿವೆ.
ಅಡಚಣೆಯನ್ನುಂಟು ಮಾಡಿರದ ಪ್ರಾಕೃತಿಕ ಮತ್ತು ಒತ್ತೊಟ್ಟಿಗಿನ ಹಸಿರು ಗಿಡಮರಗಳ ನಡುವೆ ಕ್ಯಾಂಪು ಮತ್ತು ಗಾಳಿಯಲ್ಲಿ ಹರಿದಾಡುವ ಸಿಹಿ ಸುವಾಸನೆಯ ನಡುವೆ ಸೌಮ್ಯವಾಗಿ ಸುತ್ತುಬಳಸಿ ಹರಿಯುವ ಮೂಕಾಂಬಿಕ ವನ್ಯಜೀವಿ ಅಭಯಾರಣ್ಯದ ನಡುವೆ ಆನೇಜರಿ ಬಟರ್ ಫ್ಲೈ ಕ್ಯಾಂಪು ಸೌಪರ್ಣಿಕಾ ನದಿಯೊಂದಿಗೆ ಒಂದು ಜೀವಮಾನದ ಅನುಭವದ ಆಶ್ವಾಸನೆಯನ್ನು ನೀಡುತ್ತದೆ,
ಆನೇಜರಿ ಬಟರ್ ಫ್ಲೈ ಕ್ಯಾಂಪು ಉಡುಪಿಯಿಂದ 80 ಕಿಲೋಮೀಟರುಗಳ ದೂರದಲ್ಲಿ ಕೊಲ್ಲೂರಿನ ಸಮೀಪ ಇರುವುದು.
ಕರ್ನಾಟಕ ಸರ್ಕಾರವು ಪ್ರಾಕೃತಿಕ ಪಾರಂಪರಿಕ ನಿವೇಶನ ಎಂಬುದಾಗಿ ಘೋಷಿಸಿರುವಂತಹ ಕೊಡಚಾದ್ರಿ ಬೆಟ್ಟಕ್ಕೆ (ಕರ್ನಾಟಕದಲ್ಲಿನ ಅತೀ ಎತ್ತರದ ಬೆಟ್ಟಗಳ ಪೈಕಿ 10ನೇ ಸ್ಥಾನದಲ್ಲಿರುವ) ಟ್ರೆಕಿಂಗ್ ಹೋಗಲು ಒಂದು ಅದ್ಭುತ ಅವಕಾಶವನ್ನು ನೀಡುತ್ತದೆ.ಕೊಡಚಾದ್ರಿ ಬೆಟ್ಟವು ಕೊಲ್ಲೂರಿನಲ್ಲಿರುವಂತಹ ಹೆಸರಾಂತ ಮೂಕಾಂಬಿಕಾ ದೇವಸ್ಥಾನಕ್ಕೆ ಹಿನ್ನೆಲೆ ಪರದೆಯಾಗಿ ಕಾಣುತ್ತದೆ, ಇಲ್ಲಿಗೆ ಒಂದು ಭೇಟಿ ನೀಡುವುದೂ ಸಹ ಕ್ಯಾಂಪಿನ ಅನೇಕ ಚಟುವಟಿಕೆಗಳಲ್ಲಿ ಒಂದು. ಮರವಂತೆ ಮತ್ತು ಬೈಂದೂರು, ಇವು ಎರಡು ಕಡಲತೀರಗಳು ಕ್ಯಾಂಪಿನಿಂದ ಸುಮಾರು 35 ಕಿಲೋಮೀಟರುಗಳ ದೂರದಲ್ಲಿರುವವು ಹಾಗೂ ನಮ್ಮ ಅತಿಥಿಗಳಿಗೆ ಸಂಪೂರ್ಣ ಅನುಭವವನ್ನು ಹೆಚ್ಚಳಗೊಳಿಸುವವು. ಕ್ಯಾಂಪಿನೊಳಗಿನ ಚಟುವಟಿಕೆಗಳು ಹಕ್ಕಿಗಳನ್ನು ವೀಕ್ಷಿಸುವುದು, ಚಿಟ್ಟೆಗಳನ್ನು ವೀಕ್ಷಿಸುವುದು ಹಾಗೂ ಕೆಲವು ಸಾಹಸಕ್ರೀಡೆಗಳನ್ನು ಆಧಾರಿತ ಚಟುವಟಿಕೆಗಳಿರುತ್ತವೆ (ಅಗತ್ಯ ವ್ಯವಸ್ಥೆಯ ಅಗತ್ಯತೆಯಿರುತ್ತದೆ).ಆಪ್ಯಾಯಮಾನವಾದಂತಹ ಗಾಳಿಯ ಶುಭ್ರ ಉಸಿರಾಡುವ ಸಲುವಾಗಿ ಅರಿಶಿನಗುಂಡಿ ಜಲಪಾತಕ್ಕೆ ಒಂದು ಭೇಟಿಯನ್ನು ಕ್ಯಾಂಪಿನಿಂದ ವ್ಯವಸ್ಥೆ ಮಾಡಬಹುದು.
ಚಿಟ್ಟಿಗಳ ವೀಕ್ಷಣೆಯಲ್ಲಿ, ತಮಿಳು ಲೇಸ್ ವಿಂಗ್, ಪ್ಲೈನ್ ಪಫಿನ್, ಮಲಬಾರ್ ಟ್ರೀ ನಿಂಫ್, ಪ್ಯಾರೀಸ್ ನವಿಲು ಗ್ರೇ ಕೌಂಟ್, ರೆಡ್ ಹೆಲೆನ್ ಹಾಗೂ ಬ್ಲ್ಯೂ ಓಕ್ ಲೀಫ್, ಇವುಗಳನ್ನು ಒಳಗೊಂಡಂತೆ ವಿವಿಧ ಬಣ್ಣಗಳ ಚಿಟ್ಟಿಗಳನ್ನು ವೀಕ್ಷಿಸುವ ಅವಕಾಶವನ್ನು ನಮ್ಮ ಅತಿಥಿಗಳು ಪಡೆಯಬಹುದು. ಓರ್ವ ಅತಿಥಿಯು ಒಂದು ಮಲಬಾರ್ ದೈತ್ಯ ಅಳಿಲು, ಸ್ಯಾಂಬರ್ ಜಿಂಕೆ, ಕಾಡು ಹಂದಿ, ಭಾರತೀಯ ಕಾಡೆತ್ತು/ವನವೃಷಭ, ನವಿಲುಗಳು, ಬೊಗಳುವ ಜಿಂಕೆಗಳು ಹಾಗೂ ಇತರೆ ವನ್ಯ ಪ್ರಾಣಿಗಳನ್ನು ವೀಕ್ಷಿಸಬಹುದು.
ಮಲಬಾರ್ ಪೈಡ್ ಹಾರ್ನ್ ಬಿಲ್ಲುಗಳು, ಮಲಬಾರ್ ಗ್ರೇ ಹಾರ್ನ್ ಬಿಲ್ಲುಗಳು, ಸಣ್ಣ ನೀಲಿ ಕಿಂಗ್ ಫಿಷರ್ ಗಳು, ಸ್ಟಾರ್ಕ್ ಬಿಲ್ಲ್ ಡ್ ಕಿಂಗ್ ಫಿಷರ್ ಮತ್ತು ಏಷಿಯನ್ ಪ್ಯಾರಾಡೈಸ್ ಫ್ಲೈ ಕ್ಯಾಚರ್ ಗಳನ್ನು ಒಳಗೊಂಡಂತೆ ಹಕ್ಕಿಗಳನ್ನು ಕ್ಯಾಂಪಿನಲ್ಲಿ ಕಾಣಬಹುದು. ಕ್ಯಾಂಪಿನ ಒಳಗೆ ಮಕ್ಕಳು ಆಟ ಆಡುವ ಸ್ಥಳವೂ ಇದೆ.
ಆನೇಜರಿ ನೇಚರ್ ಕ್ಯಾಂಪಿಗೆ ಭೇಟಿ ನೀಡಲು ಅತ್ಯುತ್ತಮ ಸಮಯವೆಂದರೆ ಅಕ್ಟೋಬರ್ ನಿಂದ ಮಾರ್ಚ್ ತಿಂಗಳುಗಳು.
ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ (ಎಕ್ಸ್ ಟ್ರಾ) ಪಾವತಿಸತಕ್ಕದ್ದು). (ಎಲ್ಲವೂ ಸೇರಿದಂತೆ)
ಪ್ಯಾಕೇಜು ಇವುಗಳನ್ನು ಒಳಗೊಂಡಿರುತ್ತದೆ: ಉಳಿದುಕೊಳ್ಳುವುದಕ್ಕೆ ಅಯ್ಕೆ ಮಾಡಿಕೊಳ್ಳಲಾದ ವಸತಿ ಅನುಕೂಲತೆ, ಮಧ್ಯಾಹ್ನದ ಊಟ, ರಾತ್ರಿ ಊ ಟ ಮತ್ತು ಬೆಳಗ್ಗಿನ ಉಪಹಾರ, ಟ್ರೆಕಿಂಗ್, ಅರಣ್ಯದ ಒಳಗಡೆಗೆ ಪ್ರವೇಶ ಶುಲ್ಕಗಳು ಹಾಗೂ ಜಿ ಎಸ್ ಟಿ 18%.
ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ (ಎಕ್ಸ್ ಟ್ರಾ) ಪಾವತಿಸತಕ್ಕದ್ದು). (ಎಲ್ಲವೂ ಸೇರಿದಂತೆ)
ಪ್ಯಾಕೇಜು ಇವುಗಳನ್ನು ಒಳಗೊಂಡಿರುತ್ತದೆ: ಉಳಿದುಕೊಳ್ಳುವುದಕ್ಕೆ ಅಯ್ಕೆ ಮಾಡಿಕೊಳ್ಳಲಾದ ವಸತಿ ಅನುಕೂಲತೆ, ಮಧ್ಯಾಹ್ನದ ಊಟ, ರಾತ್ರಿ ಊಟ ಮತ್ತು ಬೆಳಗ್ಗಿನ ಉಪಹಾರ, ಟ್ರೆಕಿಂಗ್, ಅರಣ್ಯದ ಒಳಗಡೆಗೆ ಪ್ರವೇಶ ಶುಲ್ಕಗಳು ಹಾಗೂ ಜಿ ಎಸ್ ಟಿ 18%.
ಪ್ಯಾಕೇಜು ಇವುಗಳನ್ನು ಒಳಗೊಂಡಿರುತ್ತದೆ: ಉಳಿದುಕೊಳ್ಳುವುದಕ್ಕೆ ಅಯ್ಕೆ ಮಾಡಿಕೊಳ್ಳಲಾದ ವಸತಿ ಅನುಕೂಲತೆ, ಮಧ್ಯಾಹ್ನದ ಊಟ, ರಾತ್ರಿ ಊಟ ಮತ್ತು ಬೆಳಗ್ಗಿನ ಉಪಹಾರ, ಟ್ರೆಕಿಂಗ್, ಅರಣ್ಯದ ಒಳಗಡೆಗೆ ಪ್ರವೇಶ ಶುಲ್ಕಗಳು ಹಾಗೂ ಜಿ ಎಸ್ ಟಿ 18%.
ಲಾಡ್ಜಿಗೆ ಪ್ರವೇಶ, ನೆಲೆಗೊಳ್ಳುವುದು ಹಾಗೂ ಕೈಕಾಲು ಮುಖ ತೊಳೆದುಕೊಂಡು ಪರಿಶುದ್ಧಗೊಳ್ಳುವುದು.
ಗೋಲ್ ಘರ್ ನಲ್ಲಿ ಸ್ವತ: ನೀವೇ ಹೊಟ್ಟೆತುಂಬ ಊಟ ಮಾಡಿರಿ.
ನಮ್ಮ ಪ್ರಕೃತಿಶಾಸ್ತ್ರ ತಜ್ಞರು ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯದ ಒಳಗೆ ಟ್ರೆಕ್ಕಿಂಗ್ ಗಾಗಿ ಕರೆದುಕೊಂಡು ಹೋಗುವರು ಮತ್ತು ಅಲ್ಲಿ ವಾಸಿಸುತ್ತಿರುವಂತಹ ಎಲ್ಲಾ ಪ್ರಾಣಿಗಳ ಬಗ್ಗೆ ತಮ್ಮ ಅನುಭವಗಳನ್ನು ವಿವರಿಸುತ್ತ ಹಾಗೂ ಮಾಹಿತಿಯನ್ನು ನೀಡುತ್ತಾ ಕರೆದುಕೊಂಡು ಹೋಗುವರು.
ಗೋಲ್ ಘರ್ ನಲ್ಲಿ ಟೀ/ಕಾಫಿ ನೀಡಲಾಗುವುದು
ಗೋಲ್ ಘರ್ ನಲ್ಲಿ ವನ್ಯಜೀವಿಗಳ ಬಗ್ಗೆ ಒಂದು ಚಲನಚಿತ್ರ ವೀಕ್ಷಣೆ
ರಾತ್ರಿ ಊಟ ಮಾಡುವ ಸಮಯದಲ್ಲಿ ಇತರೆ ಅತಿಥಿಗಳೊಂದಿಗೆ ಹಾಗೂ ನಮ್ಮ ಸಿಬ್ಬಂದಿಯೊಂದಿಗೆ ಅರಣ್ಯದ ಕತೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾ ಕ್ಯಾಂಪು ಬೆಂಕಿಯ ಬೆಚ್ಚನೆಯ ವಾತಾವರಣದಲ್ಲಿ ಸು:ಖ-ಸಂತೋಷವನ್ನು ಅನುಭವಿಸಿರಿ.
ನಿಮ್ಮನ್ನು ನಿದ್ರೆಯಿಂದ ಎದ್ದೇಳಿಸುವ ಸಲುವಾಗಿ ಕರೆ
ಗೋಲ್ ಘರ್ ನಲ್ಲಿ ಟೀ/ಕಾಫಿ ನೀಡಲಾಗುವುದು
ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯದಲ್ಲಿ ಹಕ್ಕಿಗಳ ವೀಕ್ಷಣೆ/ಚಿಟ್ಟೆಗಳ ವೀಕ್ಶಣೆ.
ಬೆಳಗ್ಗಿನ ಉಪಹಾರ.
ಪ್ರವಾಸ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತದೆ – ಲಾಡ್ಜಿನಿಂದ ಹೊರಡುವುದು.
ಬೆಂಗಳೂರಿನಿಂದ ಉಡುಪಿಗೆ ಅತ್ಯುತ್ತಮ ಬಸ್ಸುಗಳ ಸಂಪರ್ಕವಿದೆ, ಹಾಗೂ ಮಂಗಳೂರಿನಿಂದ ಉಡುಪಿಗೆ ಬಸ್ಸು ಮತ್ತು ಟ್ರೈನು ಸಂಪರ್ಕವಿದೆ. ಉಡುಪಿಯಿಂದ ಆನೆಜರಿಗೆ ಖಾಸಗಿ ಬಸ್ಸುಗಳು ಮತ್ತು ಟ್ಯಾಕ್ಸಿಗಳು ಲಭ್ಯವಿರುತ್ತವೆ. ಅಲ್ಲದೆಯೇ, ಕೊಲ್ಲೂರಿನಿಂದ ಆನೆಜರಿಗೆ ಟ್ಯಾಕ್ಸಿ ಸೇವೆಯನ್ನು ಪಡೆಯಬಹುದು.
ಅತೀ ಸಮೀಪದ ರೈಲು ನಿಲ್ದಾಣವೆಂದರೆ ಮೂಕಾಂಬಿಕ ರೋಡ್ (ಬೈಂದೂರು) ಹಾಗೂ ಅಲ್ಲಿಂದ ಕ್ಯಾಂಪಿನವರೆಗೆ ಟ್ಯಾಕ್ಸಿ ಸೇವೆಗಳು ಲಭ್ಯವಿರುತ್ತವೆ.
(English) “A flying squirrel just landed on the tree!” called out Rajini, with excitement. The clock read 7:30PM. Anuroop and I had just returned to our cottage, exhausted, after a long walk. Exhilaration took over as we catapulted from our beds, grabbed headlamps and followed Rajini with a camera and tripod in tow. The full moon that had just risen lit up the landscape.