ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಲಿಮಿಟೆಡ್ ನಿರ್ವಹಿಸುತ್ತಿರುವ 18 ರೆಸಾರ್ಟ್ಗಳಲ್ಲಿ ವ್ಯಾಪಿಸಿರುವ 356 ಕೊಠಡಿಗಳು ಅಲ್ಲದೆ, ನಿರ್ವಹಣಾ ಒಪ್ಪಂದದ ಮೇರೆಗೆ 4 ರೆಸಾರ್ಟ್ಗಳಿವೆ.
ವಿಶ್ವದ ಅತಿ ದೊಡ್ಡ ಹೊರಾಂಗಣ ವಸ್ತು ಸಂಗ್ರಹಾಲಯ ಎಂಬುದಾಗಿ ಹೆಸರು ವಾಸಿಯಾಗಿರುವಂತಹ ಹಂಪಿಯು, ಈ ಎಲ್ಲಾ ಶತಮಾನಗಳ ನಂತರವೂ ವಿಜಯನಗರ ಸಾಮ್ರಾಜ್ಯದ ವೈಭವವನ್ನು ಒತ್ತಿಹೇಳುತ್ತದೆ. ಚಲಿಸದೇ ನಿಂತಿರುವ ಪಳೆಯುಳಿಕೆಗಳು, ಅವುಗಳ ಅತೀ ಎಚ್ಚರಿಕೆಯಿಂದ ಸ್ಪುಟವಾಗಿ ರಚಿಸಲ್ಪಟ್ಟಿರುವಂತಹ ವಿನ್ಯಾಸಗಳು ಮತ್ತು ಕೆತ್ತನೆಗಳು ಯಥೇಷ್ಟತೆ ಹಾಗೂ ಭವ್ಯತೆ/ಧೀರೋದಾದ್ದತೆಗಳಿಗೆ ಗೌರವವನ್ನು ವ್ಯಕ್ತಪಡಿಸುತ್ತವೆ. ಸಾಂಪ್ರದಾಯಿಕ ಕಲ್ಲಿನ ರಥ ಹಾಗೂ ವಿಜಯ ವಿಠ್ಠಲ ದೇವಸ್ಥಾನದಲ್ಲಿನ ಪುರಾಣ ಪ್ರಸಿದ್ಧ ಸಂಗೀತದ ಕಂಬಗಳನ್ನು ಪುರಾಣ ಕತೆಗಳ ಅನುಸಾರ ಭಗವಂತ ವಿಷ್ಣುವಿಗಾಗಿಯೇ ಕಟ್ಟಲ್ಪಟ್ಟಿದ್ದಿತು ಹಾಗೂ ಪ್ರಾಚೀನ ವಿರೂಪಾಕ್ಷ ದೇವಸ್ಥಾನವನ್ನು ಭಗವಂತ ಶಿವಾ ಮತ್ತು ಪಾರ್ವತಿಯರ ವಿವಾಹ ನಿಶ್ಚಿತಾರ್ಥಕ್ಕಾಗಿ ಉಡುಗೊರೆಯಾಗಿ ನೀಡಲಾಗಿದ್ದಿತು ; ಹಾಗೂ ಚರಿತ್ರೆಯಲ್ಲಿ ಜಾರಿಕೊಂಡಿರುವಂತಹ ಅಗಣಿತ ಇತರೆ ಸ್ಮಾರಕಗಳು ಹಂಪಿ ಹೆರಿಟೇಜ್ ಅಂಡ್ ವೈಲ್ಡರ್ ನೆಸ್ ರೆಸಾರ್ಟ್ ಗೆ ಹಿನ್ನೆಲೆಯಾಗಿ ನಿಲ್ಲುತ್ತವೆ.
ಒಂದು ಹೆಸರಾಂತ ವಿಶ್ವ ಪಾರಂಪರಿಕ ನಿವೇಶನಗಳ ಒಂದು ಹಿನ್ನೆಲೆಯಲ್ಲಿ, ಹಂಪಿ ಹೆರಿಟೇಜ್ ಅಂಡ್ ವೈಲ್ಡರ್ ನೆಸ್ ರೆಸಾರ್ಟ್ ಒಂದು ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟಿನ ಹೋಟೆಲು ಆಸ್ತಿಯಾಗಿ ಹೆಚ್ಚು ಪ್ರಸಿದ್ಧಿಯನ್ನು ಪಡೆದಿರುವುದು. ಹಳ್ಳತಿಟ್ಟಿನ ಕಣಿವೆಯಲ್ಲಿ ಸ್ಲಾತ್ ಕರಡಿಗಳಿಗೆ ಒಂದು ಪ್ರಾಕೃತಿಕ ಮೂಲ ವಾಸ ಸ್ಥಾನವಾಗಿರುವಂತಹ ದರೋಜಿ ಸ್ಲಾತ್ ಕರಡಿಗಳ ಅಭಯಾರಣ್ಯದ ಅಂಚಿನಲ್ಲಿ ಇದ್ದು ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ನ ಅನುಭವಕ್ಕೆ ತಕ್ಕಂತೆ ಸಾಹಸಕಾರ್ಯಗಳ ಅಂಶಗಳನ್ನು/ಭಾಗಗಳನ್ನು ನೀಡುತ್ತದೆ. ಕುರುಚಲು ಕಾಡನ್ನು ವ್ಯಾಪಿಸಿರುವಂತಹ ಬಂಜರು ಭೂ-ಇಳಿಜಾರು ಗ್ರಾಮೀಣ ಎಂಬ ಪದಕ್ಕೆ ಒಂದು ಸಂಪೂರ್ಣ ವಿಭಿನ್ನ ಆಯಾಮವನ್ನು ನೀಡುತ್ತದೆ.
ಹಂಪಿ ಹೆರಿಟೇಜ್ ಅಂಡ್ ವೈಲ್ಡರ್ ನೆಸ್ ರೆಸಾರ್ಟಿನಲ್ಲಿ ನಮ್ಮ ಅತಿಥಿಗಳು ಆನಂದಿಸುವ ಸಲುವಾಗಿ ಬಹಳಷ್ಟು ಕಾರ್ಯಕ್ರಮಗಳಿರುತ್ತವೆ. ತಮ್ಮ ಒಂದು ಪ್ರಾಕೃತಿಕ ಮೂಲ ವಾಸ ಸ್ಥಾನದಲ್ಲಿ ವಾಸಿಸುತ್ತಿರುವಂತಹ ಸ್ಲಾತ್ ಕರಡಿಗಳನ್ನು ಒಂದು ಬೆಟ್ಟದ ಮೇಲ್ತುದಿಯಲ್ಲಿ ನಿಂತಿರುವಂತಹ ಒಂದು ವೀಕ್ಷಣಾ ಗೋಪುರದಿಂದ ವೀಕ್ಷಿಸುವುದರ ಜೊತೆಗೆ, ನೀವು ಅದೃಷ್ಟವಂತರಾಗಿದ್ದಲ್ಲಿ, ನೀವು ಕಾಡು ಹಂದಿಗಳನ್ನು, ಕಪ್ಪು ಬಣ್ಣದ ಮೇಲುಭಾಗವನ್ನು ಹೊಂದಿರುವಂತಹ ಮೊಲಗಳು, ಪ್ಯಾಂಗೋಲಿನ್ ಗಳು, ಪಾರ್ಕ್ಯುಪೈನ್ ಸಮುದ್ರ ಮೀನುಗಳು, ನರಿಗಳು ಮತ್ತು ಚಿರತೆಗಳನ್ನು ಕಾಣಬಹುದು. ಅರಣ್ಯದೊಳಕ್ಕೆ 8 ಕಿಲೋಮೀಟರುಗಳ ಚಾಲನೆಯು ಅಗಣಿತ ನವಿಲುಗಳು, ಚುಚ್ಚುಮುಳ್ಳು ಕಾಡುಕೋಳಿ, ಹಳದಿ ನಾಲಿಗೆಯ ಬುಲ್ ಬುಲ್ ಗಳು, ಸ್ಯಾಂದ್ ಗ್ರೌಸ್, ಕ್ವೈಲ್ಸ್ , ಸಿರ್ ಕೀರ್, ಮಲ್ಕೊಹಸ್ ಹಾಗೂ ಸ್ಟೋನ್ – ಕರ್ಲ್ಯೂಗಳನ್ನು ಒಳಗೊಂಡಂತೆ ಆ ಪ್ರದೇಶದ ನಿವಾಸಿಗಳಾಗಿರುವ ಹಕ್ಕಿಗಳನ್ನು ವೀಕ್ಷಿಸಬಹುದು. ಸ್ಲಾತ್ ಕರಡಿಗಳ ತಾಣಕ್ಕೆ ಸಫಾರಿಯನ್ನು ಹೊರತುಪಡಿಸಿ, ದೇವಸ್ಥಾನಗಳು, ಪ್ರಕೃತಿಯಲ್ಲಿ ನಡಿಗೆ ಹಾಗೂ ಪಕ್ಷಿಗಳ ವೀಕ್ಷಣೆಯು ಕೆಲವು ಇತರೆ ಕಾರ್ಯಚಟುವಟಿಕೆಗಳಾಗಿರುತ್ತವೆ.
ಬೆಳಗ್ಗಿನ ಸಮಯವು ಹಂಪಿನ ಪಾರಂಪರಿಕ ಸ್ಥಳಗಳನ್ನು ವ್ಯಾಪಿಸಿದಂತೆ ಅತ್ಯುತ್ತಮವಾಗಿ ಕಳೆದ ಸಮಯವಾಗಿರುತ್ತದೆ, ಅದನ್ನು ಸವಿಸ್ತೃತವಾಗಿ ಪವಿತ್ರ ಕೇಂದ್ರ, ರಾಜರ ಕೇಂದ್ರ, ನಗರ ಭಾಗ ಹಾಗೂ ಉಪ-ನಗರ/ಪ್ರಾಂತೀಯ ನಿವೇಶನಗಳು ಎಂಬುದಾಗಿ ವಿಭಜಿಸಲಾಗಿರುವುದು. ತುಂಗಾ ನದಿಯನ್ನು ದಾಟಿದಲ್ಲಿ ಆನೆಗುಂದಿ ಇರುವುದು, ಅದರ ಹಳೆಯ ಪ್ರಪಂಚದ – ನಯನಾಜೂಕಿನಿಂದ ಕಣ್ಸೆಳೆಯುವ ಮನೆಗಳು, ಬತ್ತದ ಗದ್ದೆಗಳಿಗೆ ನೀರಾವರಿ ಸೌಲಭ್ಯವನ್ನು ಒದಗಿಸುತ್ತಿರುವಂತಹ ಮೇಲು ನಾಲೆಗಳು (ಅಕ್ವಿಡಿಕ್ಟ್) ಹಾಗೂ ಪೌರಾಣಿಕ ಮೈಲಿಕಲ್ಲುಗಳ ಜೊತೆಯಲ್ಲಿ ಅದು ರಾಮಾಯಣದಲ್ಲಿನ ಕಿಷ್ಕಿಂದ ಎಂಬುದಾಗಿ ಹೆಸರು ವಾಸಿಯಾಗಿದ್ದಿತು. ಬದಾಮಿ, ಐಹೊಳೆ ಮತ್ತು ಪಟ್ಟದಕಲ್ಲಿನ ಮಹಾವೈಭವದಿಂದ ಕೂಡಿದ ಪಾರಂಪರಿಕ ಸ್ಥಳಗಳನ್ನು ಕಂಡುಕೊಳ್ಳಲು ಸ್ಲಾತ್ ಕರಡಿಗಳ ಅಭಯಾರಣ್ಯವು ಮೂಲ ಸ್ಥಳವನ್ನಾಗಿರಿಸಿಕೊಳ್ಳಲು ಉತ್ತಮವಾಗಿದೆ.
ದಿನದ ಅಂತ್ಯದಲ್ಲಿ ರುಚಿಕರವಾದಂತಹ ರಾತ್ರಿ ಊಟಕ್ಕಾಗಿ ವಿಶ್ರಾಂತಿ ತೆಗೆದುಕೊಳ್ಳಿರಿ.ನಮ್ಮ ಮೇಲೆ ವಿಶ್ವಾಸವನ್ನಿಡಿರಿ, ನಮ್ಮ ಜೊತೆಗಿನ ನಿಮ್ಮ ಮೂರನೆಯ ದಿನವೂ ಕೂಡ ರೆಸಾರ್ಟಿನಿಂದ ಕಾಣಬಹುದಾದಂತಹ ಎಲ್ಲಾ ಅದ್ಭುತಗಳ ಒಂದು ಭಾಗವನ್ನು ಮಾತ್ರ ವ್ಯಾಪಿಸಿರುತ್ತೀರಿ.
ಭೇಟಿ ನೀಡುವವರಿಗೆ ರೆಸಾರ್ಟು ವರ್ಷ ಪೂರ್ತಿ ಮುಕ್ತವಾಗಿರುತ್ತದೆ. ಜುಲೈ ಯಿಂದ ಮಾರ್ಚ್ ತಿಂಗಳುಗಳಲ್ಲಿ ವಾತಾವರಣವು ಅತ್ಯಂತ ಆಹ್ಲಾದಕರವಾಗಿರುತ್ತದೆಯಾದ್ದರಿಂದ ಹಾಗೂ ವನ್ಯ ಜೀವಿಗಳನ್ನು ಕಾಣಲು ಅತ್ಯುತ್ತಮ ಸಮಯವಾಗಿರುವುದರಿಂದ ಅತ್ಯುತ್ತಮ ಕಾಲವಾಗಿರುತ್ತದೆ. ಸ್ಲಾತ್ ಕರಡಿಗಳನ್ನು ವರ್ಷ ಪೂರ್ತಿ ಕಾಣಬಹುದು. ಬೇಸಿಗೆ ಕಾಲವು ಶಾಖೆಯಿಂದ ಕೂಡಿರುತ್ತದೆ. ಮಳೆಗಾಲ ಕಳೆದನಂತರ, ಕಲ್ಲುಬಂಡೆಗಳಿಂದ ಕೂಡಿದ ಭೂ ಇಳಿಜಾರು ದೃಶ್ಯಗಳು ಹಾಗೂ ಬತ್ತದ ಗದ್ದೆಗಳು ಪರಿಶುಭ್ರವಾಗಿರುತ್ತವೆ ಹಾಗೂ ಹಸಿರುಮಯವಾಗಿದ್ದು ಕಣ್ಣಿಗೆ ಆನಂದದಾಯಕವಾಗಿರುತ್ತದೆ. ನವಂಬರ್ ನಿಂದ ಫೆಬ್ರವರಿ ಪ್ರವಾಸಿಗರ ಸಂಖ್ಯೆಯು ಅತ್ಯುನ್ನತ ಮಟ್ಟದಲ್ಲಿರುತ್ತದೆ.
ಕೇವಲ ಉಳಿದುಕೊಳ್ಳುವಿಕೆ, ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ ಆಗಿರುತ್ತದೆ ಮತ್ತು ಹೆಚ್ಚುವರಿ ವ್ಯಕ್ತಿಗೆ ರೂ.500/-. ಮಧ್ಯಾಹ್ನದ ಊಟ, ರಾತ್ರಿ ಊಟ ಮತ್ತು ಬೆಳಗ್ಗಿನ ಉಪಹಾರ, ಸಫಾರಿ ಚಟುವಟಿಕೆಗಳು, ಇವು ಹೆಚ್ಚುವರಿ ವೆಚ್ಚಗಳ ಪಾವತಿಯ ಆಧಾರದ ಮೇರೆಗೆ. ಜಿಎಸ್ಟಿ 18% ಹೆಚ್ಚುವರಿ.
ನೀವು ಆನ್ ಲೈನ್ ಮೂಲಕ ಕಾಯ್ದಿರಿಸಿದಲ್ಲಿ, ಕೆಲಸದ ದಿನಗಳಲ್ಲಿ ಪ್ರಕಟಿಸಲಾಗಿರುವಂತಹ ವಾರಾಂತ್ಯದ ದರಗಳ ಮೇಲೆ 15% ರಿಯಾಯಿತಿ ಅನ್ವಯಗೊಳ್ಳುತ್ತದೆ.
ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ (ಎಕ್ಸ್ ಟ್ರಾ) ಪಾವತಿಸತಕ್ಕದ್ದು).
ಪ್ಯಾಕೇಜುಗಳು ಇವುಗಳನ್ನು ಒಳಗೊಂಡಿರುತ್ತವೆ : ಉಳಿದುಕೊಳ್ಳುವುದಕ್ಕೆ ಅಯ್ಕೆ ಮಾಡಿಕೊಳ್ಳಲಾದ ವಸತಿ ಅನುಕೂಲತೆ, ಉಳಿದುಕೊಳ್ಳುವಿಕೆ, ಮಧ್ಯಾಹ್ನದ ಊಟ, ರಾತ್ರಿ ಊಟ ಮತ್ತು ಬೆಳಗ್ಗಿನ ಉಪಹಾರ, ಜೀಪು ಸಫಾರಿ, ಹಂಪಿಗೆ ಭೇಟಿ, ಅರಣ್ಯದೊಳಕ್ಕೆ ಪ್ರವೇಶ ಶುಲ್ಕಗಳು ಮತ್ತು ಜಿ ಎಸ್ ಟಿ 18%
*ಮೇಲೆ ತಿಳಿಸಲಾದಂತಹ ದರಪಟ್ಟಿ/ಟಾರಿಫಿನ ಮೇಲೆ ಕಾಲೋಚಿತ (ಸೀಸನಲ್) ದರ ಹೆಚ್ಚಳವು ಅನ್ವಯಗೊಳ್ಳುತ್ತದೆ
ಕಾಟೇಜು – ಹಾಸಿಗೆ ಮತ್ತು ಬೆಳಿಗ್ಗೆ ಉಪಹಾರ ಪ್ಯಾಕೇಜು – ವ್ಯಕ್ತಿಯೊಬ್ಬರಿಗೆ ರೂ.1,900.00
ನೀವು ಆನ್ ಲೈನ್ ಮೂಲಕ ಕಾಯ್ದಿರಿಸಿದಲ್ಲಿ, ಕೆಲಸದ ದಿನಗಳಲ್ಲಿ ಪ್ರಕಟಿಸಲಾಗಿರುವಂತಹ ವಾರಾಂತ್ಯದ ದರಗಳ ಮೇಲೆ 15% ರಿಯಾಯಿತಿ ಅನ್ವಯಗೊಳ್ಳುತ್ತದೆ.
ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ (ಎಕ್ಸ್ ಟ್ರಾ) ಪಾವತಿಸತಕ್ಕದ್ದು).
ಪ್ಯಾಕೇಜುಗಳು ಇವುಗಳನ್ನು ಒಳಗೊಂಡಿರುತ್ತವೆ : ಉಳಿದುಕೊಳ್ಳುವುದಕ್ಕೆ ಅಯ್ಕೆ ಮಾಡಿಕೊಳ್ಳಲಾದ ವಸತಿ ಅನುಕೂಲತೆ, ಉಳಿದುಕೊಳ್ಳುವಿಕೆ, ಮಧ್ಯಾಹ್ನದ ಊಟ, ರಾತ್ರಿ ಊಟ ಮತ್ತು ಬೆಳಗ್ಗಿನ ಉಪಹಾರ, ಜೀಪು ಸಫಾರಿ, ಹಂಪಿಗೆ ಭೇಟಿ, ಅರಣ್ಯದೊಳಕ್ಕೆ ಪ್ರವೇಶ ಶುಲ್ಕಗಳು ಮತ್ತು ಜಿ ಎಸ್ ಟಿ 18%
ಮೇಲೆ ತಿಳಿಸಲಾದಂತಹ ದರಪಟ್ಟಿ/ಟಾರಿಫಿನ ಮೇಲೆ ಕಾಲೋಚಿತ (ಸೀಸನಲ್) ದರ ಹೆಚ್ಚಳವು ಅನ್ವಯಗೊಳ್ಳುತ್ತದೆ.
ಹಾಸಿಗೆ ಮತ್ತು ಬೆಳಿಗ್ಗೆ ಉಪಹಾರ ಪ್ಯಾಕೇಜು – ವ್ಯಕ್ತಿಯೊಬ್ಬರಿಗೆ ರೂ.1,900.00
ಲಾಡ್ಜಿಗೆ ಪ್ರವೇಶಿಸುವುದು – ನೆಲೆಗೊಳ್ಳುವುದು ಹಾಗೂ ಕೈಕಾಲು ಮುಖ ತೊಳೆದುಕೊಂಡು ಪರಿಶುದ್ಧಗೊಳ್ಳುವುದು.
ಗೋಲ್ ಘರ್ ನಲ್ಲಿ ಸ್ವತ: ನೀವೇ ಹೊಟ್ಟೆತುಂಬ ಊಟ ಮಾಡಿರಿ.
ರಿಸೆಪ್ಷನ್ ಪ್ರದೇಶದಲ್ಲಿ ಸಫಾರಿ ಬ್ರೀಫಿಂಗ್ನೊಂದಿಗೆ ಬಡಿಸಿದ ಚಹಾ / ಕಾಫಿಯೊಂದಿಗೆ ಉದ್ಯಾನವನಕ್ಕೆ ಸವಾರಿ ಮಾಡಲು ಸಜ್ಜಾಗಿರಿ
ನಮ್ಮ ನೈಸರ್ಗಿಕವಾದಿಗಳು ನಿಮ್ಮನ್ನು ವಾಹನದಲ್ಲಿನ ಸಫಾರಿಗಾಗಿ ದಾರೋಜಿ ಸೋಮಾರಿ ಕರಡಿ ಅಭಯಾರಣ್ಯಕ್ಕೆ ಕರೆದೊಯ್ಯುತ್ತಾರೆ ಮತ್ತು ಕಾಡಿನ ಬಗ್ಗೆ ಮತ್ತು ಅಲ್ಲಿ ವಾಸಿಸುವ ಎಲ್ಲಾ ಪ್ರಾಣಿಗಳ ಬಗ್ಗೆ ತಮ್ಮ ಅನುಭವಗಳನ್ನು ಮತ್ತು ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ.
ಗೋಲ್ ಘರ್ ನಲ್ಲಿ ಟೀ/ಕಾಫಿ ನೀಡಲಾಗುವುದು.
ಕ್ಯಾಂಪ್ಫೈರ್ನ ಉಷ್ಣತೆಯಲ್ಲಿ ಕಾನ್ಫರೆನ್ಸ್ ಹಾಲ್ ಮತ್ತು ಬಾಸ್ಕ್ನಲ್ಲಿ ವನ್ಯಜೀವಿ ಚಲನಚಿತ್ರ ಪ್ರದರ್ಶನವನ್ನು ವೀಕ್ಷಿಸಿ.
ಗೋಲ್ ಘರ್ ನಲ್ಲಿ ರಾತ್ರಿ ಊಟ ಮಾಡುವ ಸಮಯದಲ್ಲಿ ಇತರೆ ಅತಿಥಿಗಳೊಂದಿಗೆ ಹಾಗೂ ನಮ್ಮ ಸಿಬ್ಬಂದಿಯೊಂದಿಗೆ ಅರಣ್ಯದ ಕತೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾ ಕ್ಯಾಂಪು ಫೈರಿನ ಬೆಚ್ಚನೆಯ ವಾತಾವರಣದಲ್ಲಿ ಸು:ಖವನ್ನು ಅನುಭವಿಸಿರಿ.
ನಿಮ್ಮನ್ನು ನಿದ್ರೆಯಿಂದ ಎಬ್ಬಿಸುವುದಕ್ಕಾಗಿ ಕರೆ
ಗೋಲ್ ಘರ್ ನಲ್ಲಿ ಸ್ವತ: ನೀವೇ ಹೊಟ್ಟೆತುಂಬ ಬೆಳಗ್ಗಿನ ಉಪಹಾರವನ್ನು ಸೇವಿಸಿರಿ.
ಹಂಪಿಯಲ್ಲಿನ ದೇವಸ್ಥಾನಗಳಿಗೆ ಹೋಗುವುದು.
ನೀವು ಹೊರಡಬೇಕಾದರೆ, ಈ ಬೆಟ್ಟಗಳ ಇನ್ನೂ ಅನ್ವೇಷಿಸದ ರಹಸ್ಯಗಳನ್ನು ಕಂಡುಹಿಡಿಯಲು ನಿಮ್ಮ ಮುಂದಿನ ಭೇಟಿಯನ್ನು ನಾವು ಎದುರು ನೋಡುತ್ತೇವೆ.
(English)
ರೆಸಾರ್ಟು ಬೆಂಗಳೂರಿನಿಂದ 347 ಕಿಲೋಮಿಟರುಗಳ ದೂರದಲ್ಲಿರುವುದು ಹಾಗೂ ಹೈದರಾಬಾದಿನಿಂದ 373 ಕಿಲೋಮೀಟರುಗಳ ದೂರದಲ್ಲಿರುವುದು ಹಾಗೂ ರಾಷ್ಟ್ರೀಯ ಹೆದ್ದರಿ ಮತ್ತು ರಾಜ್ಯ ಹೆದ್ದಾರಿಗಳಿಂದ ಅತ್ಯುತ್ತಮವಾದ ಸಂಪರ್ಕವನ್ನು ಹೊಂದಿರುವುದು.
ಬೆಂಗಳೂರು ಮತ್ತು ಹೈದರಾಬಾದಿಗೆ ಬಹಳ ಕಡಿಮೆ ಅಂತರದಲ್ಲಿ ಟ್ರೈನುಗಳಿದ್ದು ಹೊಸಪೇಟೆ ಜಂಕ್ಷನ್ನು ಅತೀ ಸಮೀಪದ ರೈಲ್ವೇ ಸ್ಟೇಷನ್ ಆಗಿರುತ್ತದೆ "ಹೆಚ್ಚುವರಿ ಪಾವತಿಯ ಷರತ್ತಿಗೆ ಒಳಪಟ್ಟಂತೆ ಹೊಸಪೇಟೆ ರೈಲು ನಿಲ್ದಾಣ/ಬಸ್ಸು ನಿಲ್ದಾಣಗಳಿಂದ ಕರೆದುಕೊಂಡು ಬರುವ ಹಾಗೂ ರೈಲು ನಿಲ್ದಾಣ/ಬಸ್ಸು ನಿಲ್ದಾಣಕ್ಕೆ ಬಿಡುವ ಅನುಕೂಲತೆಯನ್ನು ಮಾಡಲಾಗುವುದು."
ರೆಸಾರ್ಟಿನಿಂದ 28 ಕಿಲೋಮೀಟರುಗಳ ದೂರದಲ್ಲಿರುವ ಬಳ್ಳಾರಿಯ ಜಿಂದಾಲ್ ವಿದ್ಯಾನಗರ ವಿಮಾನ ನಿಲ್ದಾಣವು ಅತೀ ಸಮೀಪದ ವಿಮಾನ ನಿಲ್ದಾಣವಾಗಿರುತ್ತದೆ. ಜಿಂದಾಲ್ ವಿದ್ಯಾನಗರ ವಿಮಾನ ನಿಲ್ದಾಣವು ಪ್ರತೀ ದಿನವೂ ಒಳಬರುವ ಹಾಗೂ ಹೊರಹೋಗುವ ವಿಮಾನಗಳಿಂದ ಹೈದರಾಬಾದು ಮತ್ತು ಬೆಂಗಳೂರಿಗೆ ಅತ್ಯುತ್ತಮವಾದ ಸಂಪರ್ಕವನ್ನು ಹೊಂದಿರುತ್ತದೆ. ಪ್ರಸಕ್ತ ವಿಮಾನಗಳ ವೇಳಾಪಟ್ಟಿ: ಹೈದರಾಬಾದು 12.20 – ವಿದ್ಯಾನಗರ 13.25 – ಬೆಂಗಳೂರು 15.25 – ವಿದ್ಯಾನಗರ 16.25 ವಿದ್ಯಾನಗರ 16.55 – ಹೈದರಾಬಾದು 17.55 ವಿದ್ಯಾನಗರ 13.55 – ಬೆಂಗಳೂರು 14.55 ಇದು ವಿಜಯನಗರ ಆಗಿರಬೇಕು – ದಯವಿಟ್ಟು ಪರೀಕ್ಷಿಸಿರಿ ಹಾಗೂ ಖಚಿತಪಡಿಸಿಕೊಳ್ಳಿರಿ
Bengaluru to Hampi Heritage & Wilderness Resort https://goo.gl/maps/bmFNc1khLd42
Bengaluru to Hampi Heritage & Wilderness Resort https://goo.gl/maps/bmFNc1khLd42
(English) A nomadic herder ambling along a sun-soaked dusty track, with hundreds of unhurried sheep; Villages juxtaposed with monuments carved out of stone; Hordes of boys waiting patiently for fish to bite at their carelessly thrown lines – with such a languid pace of life, one gets a haunting feeling that time has stopped ticking temporarily in this otherworldly slice of earth called Hampi.